ಮನಸೆಳೆವ ಸಂಗೀತದ ಮಧ್ಯೆ ಜೀ ಮ್ಯೂಸಿಕ್ ಅವಾಡ್ಸ್
Posted date: 14 Tue, Jul 2015 – 09:47:51 AM

ಜೀ ಕನ್ನಡ ವಾಹಿನಿ ಮೊದಲ ಬಾರಿಗೆ ಆಯೊಜಿಸಿದ್ದ ಜೀ ಮ್ಯೂಸಿಕ್ ಅವಾಡ್ಸ್ ಕಾರ್ಯಕ್ರಮ ಕೆಂಗೇರಿಯ ಬಿ.ಜಿ.ಎಸ್. ಆಡಿಟೋರಿಯಂನಲ್ಲಿ ನಡೆಯಿತು. ವಿಭಿನ್ನವಾದ ಧಾರಾವಾಹಿಗಳು, ರಿಯಲಿಟಿ ಷೋ ನಂಥ ಕಾರ್ಯಕ್ರಮಗಳಿಂದ ವೀಕ್ಷಕರ ಮನ ಗೆದ್ದಿರುವ ಈ ವಾಹಿನಿ ಈಗ ಸಿನಿಮಾ ಸಂಗೀತ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ  ಮೂಲಕ ಮತ್ತಷ್ಟು ವಿಶೇಷತೆ ಮೆರೆಯಿತು.
     ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಗೀತಗಾರರಾದ ರಿಕ್ಕಿ ಕೇಜ, ರಘು ದೀಕ್ಷಿತರಂಥ ಸಾಧಕರನ್ನು ಅಂದು ಗೌರವಿಸಲಾಯಿತು. ಹಲವಾರು ದಶಕಗಳಿಂದ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಲಹರಿ ಸಂಸ್ಥೆಗೆ ಕೂಡ ಈ ಸಂದರ್ಭದಲ್ಲಿ  ಗೌರವಿಸಲಾಯಿತು. ಅಲ್ಲದೆ ಸುಗಮ ಸಂಗೀತ ಕ್ಷೇತ್ರದ ಮಾಣಿಕ್ಯ ಎನಿಸಿಕೊಂಡಿರುವ ದಿ. ಸಿ. ಅಶ್ವಥ್ ಅವರಿಗೆ ಸುಗಮ ಸಂಗೀತ ಸಾಮ್ರಾಟ್ ಎಂಬ ಬಿರುದು ನೀಡಿ, ಅಶ್ವಥ್ ಕುಟುಂಬವನ್ನು ಕೂಡ ಸನ್ಮಾನಿಸಲಾಯಿತು. ಸಂಗೀತ ನಿರ್ದೇಶಕರು, ಗೀತ ರಚನೆಕಾರರು ಹಾಗೂ ಸಂಗೀತ ಪ್ರೇಮಿಗಳು ಕೂಡ ಈ  ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು  ತುಂಬಿದರು. ನಟ ರಮೆಶ್ ಅರವಿಂದ್ ಅವರ ನಿರೂಪಣೆ, ಅರುಣ್ ಸಾಗರ್ ಮತ್ತು ಅನುಶ್ರೀ ಅವರ ನವಿರಾದ ಹಾಸ್ಯದ ಮಾತುಗಳು  ಸಮಾರಂಭಕ್ಕೆ ಹೆಚ್ಚಿನ ಕಳೆ ನೀಡಿತು.

ಬೆಡಗಿ ರಚಿತಾ ರಾಮ ಹಾಸ್ಯನಟ ಚಿಕ್ಕಣ್ಣ, ನಟಿ ಶ್ರುತಿ ಹರಿಹರನ್ ಅವರ ವಿಶೇಷ ನೃತ್ಯ, ಸ್ಟಿಫನ್ ದೇವಸ್ಸಿ, ಪ್ರವೀಣ ಗೊಡ್ಖಿಂಡಿ, ಮಂಜುನಾಥ್ ಅವರ ಜುಗಲ್ ಬಂದಿ, ರಘು ದೀಕ್ಷಿತ್, ಹೇಮಂತ್, ನಂದಿತಾ, ಅರ್ಚನಾ ಉಡುಪ, ಚೇತನ್, ಚಿನ್ಮಯ್, ಎಲ.ಎನ್. ಶಾಸ್ತ್ರಿ, ಚೈತ್ರಾ ಅವರ ಇಂಪಾದ ಗಾಯನ ನೆರೆದಿದ್ದವರ ಮನವನ್ನು ಸೂರೆಗೊಂಡಿತು. ಹೊಸದಾಗಿ ಪ್ರಾರಂಭವಾಗುತ್ತಿರುವ ಕಾರ್ಯಕ್ರಮ ಸರೆಗಮಪಕ್ಕೆ   ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ಚಾಲನೆ ನೀಡಿದರು. ಹಿರಿಯ ನಿರ್ದೇಶಕ ಕೆ.ಎಸ್.ಎಲ. ಸ್ವಾಮಿ, ಎಸ್. ನಾರಾಯಣ, ನಂದಿತಾ ಮತ್ತು ಎಂ.ಡಿ. ಪಲ್ಲವಿ ಜ್ಯೂರಿಗಳಾಗಿ ಕಾರ್ಯನಿರ್ವಹಿಸಿzರೆ. ಕ್ರೇಜಿಸ್ಟಾರ್ ರವಿಚಂದ್ರನ್, ವಿಜಯ ರಾಘವೇಂದ್ರ, ಪೂಜಾ ಗಾಂಧಿ, ನೀತು, ನಂದಕಿಶೊರ್ ಇನ್ನಿತರ ಕಲಾವಿದರು ಸಮಾರಂಭದಲ್ಲಿ ಅತಿಥಿಗಳಾಗಿದ್ದರು. ಇದೇ ೧೮ ಹಾಗೂ ೧೯ರಂದು ಜೀ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed